
“ಆಧುನಿಕೋತ್ತರ ಯುಗದ ಶಿಕ್ಷಕರು ನಿರಂತರ ಬದಲಾಗುತ್ತಿರುವ,ಬೆಳೆಯುತ್ತಿರುವ ತಂತ್ರಜ್ಞಾನದ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಾಗಿದೆ.ತಂತ್ರಜ್ಞಾನಕ್ಕೆ ಬಲಿಯಾಗದೆ ಅದನ್ನು ಕಲಿಕೆಯ ಅಗತ್ಯಗಳಿಗೆ ತಕ್ಕಂತೆ ಒಲಿಸಿಕೊಳ್ಳಬೇಕಾಗಿದೆ.ಸಂವಹನದ ಮರ್ಮವನ್ನು ಅರಿಯಬೇಕಾಗಿದೆ” ಎಂದು ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನ
ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ನುಡಿದರು.ಅವರು ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ‘ ನಾನೇಕೆ ಶಿಕ್ಷಕ
ವೃತ್ತಿಯನ್ನು ಆಯ್ದುಕೊಂಡೆ?’ ಎಂಬ ಅಭಿಪ್ರಾಯ ವಿನಿಮಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ
ಮಾತನಾಡುತ್ತಿದ್ದರು.ವಿದ್ಯಾರ್ಥಿ – ಶಿಕ್ಷಕರಾದ ತನ್ವಿ ವಿಶಿಷ್ಟ ಹೇಮಂತ್,ಸಬೀನಾ,ರಮ್ಯ.ಜೆ,ಕಿರಣ್ ಕುಮಾರ್ ಮತ್ತು
ಪರಶು.ಡಿ.ಎಂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಆಶಾ ಫೆರ್ನಾಂಡಿಸ್ ಸ್ವಾಗತ ಕೋರಿದರೆ ದೀಪ್ತಿ ವಸಂತ್
ಧನ್ಯವಾದ ಸಲ್ಲಿಸಿದರು.ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.