ಬಿಎಡ್ ವ್ಯಾಸಂಗ ಕ್ರಮ ಪರಿಚಯ

ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಈಚೆಗೆ ನೂತನ ವಿದ್ಯಾರ್ಥಿ ಶಿಕ್ಷಕರಿಗಾಗಿ ಒಂದು ದಿನದ
ವ್ಯಾಸಂಗಕ್ರಮ ಪರಿಚಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕಾಲೇಜಿನ ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ಕಾಲೇಜಿನ ಸಂಸ್ಥಾಪಕರಾದ ದಿ ಮಾಧವ ಪೈ ಯವರ ದೂರದರ್ಶಿತ್ವ,ಕನಸುಗಾರಿಕೆ,ಕ್ರತು ಶಕ್ತಿ ಹಾಗೂ ದಣಿವರಿಯದ ದುಡಿಮೆಯಿಂದಾಗಿ ಅಖಂಡ ದಕ್ಷಿಣ ಕನ್ನಡ ಜಿಲ್ಲೆ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದೆ ಎಂದರಲ್ಲದೆ ಕಾಲೇಜಿನ ಇತಿಹಾಸ ಹಾಗೂ ಪರಂಪರೆಯನ್ನು ಕುರಿತು ಹೆಚ್ಚಿನ ಬೆಳಕು ಚೆಲ್ಲಿದರು.ಬಳಿಕ ಉಪನ್ಯಾಸಕಿಯರಾದ ಧನಲಕ್ಷ್ಮಿ,ಪ್ರೀತಿ ಎಸ್ ರಾವ್,ಉಷಾ ಎಚ್,ರೂಪಾ ಕೆ ,ಮಮತಾ ಸಾಮಂತ್ ಮತ್ತು ಗ್ರಂಥಪಾಲಕ ವಿಜಯಕುಮಾರ್ ಬಿಎಡ್ ಅಧ್ಯಯನದ ವಿವಿಧ ಅಂಗಗಳನ್ನು ಪರಿಚಯಿಸಿದರು.ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾರ್ಥನೆ,ಶಿಸ್ತು, ಸಮವಸ್ತ್ರ ಹಾಗು ಸಹಪಠ್ಯ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿ ಶಿಕ್ಷಕರಿಗೆ ಸೂಕ್ತ ಮಾಹಿತಿ ಒದಗಿಸಲಾಯಿತು.