“ಸಾಧನೆಗೆ ಮೊದಲ ಹೆಜ್ಜೆಯೇ ಒಳ್ಳೆಯ ಯೋಜನೆ”


ಡಾ.ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಡಾ. ಬಿ.ಎಲ್.ಶಂಕರನಾರಾಯಣ ಸಂಸ್ಮರಣ ಉಪನ್ಯಾಸ ಕಾರ್ಯಕ್ರಮದಲ್ಲಿ ‘ವನ್ ಗುಡ್ ಸ್ಟೆಪ್’ ಸ್ವಯಂ ಸೇವಾ ಸಂಸ್ಥೆಯ ಸ್ಥಾಪಕಿ ಶ್ರೀಮತಿ ಅಮಿತಾ ಪೈಯವರು ‘ಒಂದು ಒಳ್ಳೆಯ ಮೊದಲ ಹೆಜ್ಜೆ-ನನ್ನ ಜೀವನದ ತಾತ್ವಿಕತೆ’ ಎಂಬ ವಿಚಾರವನ್ನು ಕುರಿತು ಮಹತ್ತರ ಸಾಧನೆಗೆ ಒಳ್ಳೆಯ ಯೋಜನೆ, ಆಲೋಚನೆ, ತಾಳ್ಮೆ ಧೈರ್ಯಬೇಕು ಎಂಬುದಾಗಿ ಹೇಳಿದರು.
ಉತ್ತಮ ಸಾಧನೆಯ ಮೊದಲ ಹೆಜ್ಜೆಯೇ ಯೋಜನೆ ಆ ಪಥದಲ್ಲಿ ಸಾಗಲು ನಮ್ಮ ಜೊತೆ ಯಾರೂ ಇಲ್ಲದಿದ್ದರೂ ಧೈರ್ಯದಿಂದ, ತಾಳ್ಮೆಯಿಂದ ಸಮಸ್ಯೆಗಳನ್ನು ಎದುರಿಸುತ್ತಾ ಮುನ್ನಡೆಯಬೇಕು. ಇದು ನಮ್ಮ ಜೀವನ ತತ್ತ÷್ವವಾಗಬೇಕು ಎಂದು ಸಾಧನೆಯ ಮಾರ್ಗಗಳನ್ನು ತಮ್ಮ ಬದುಕಿನ ಸಾಧನೆಯೊಂದಿಗೆ ಸಮೀಕರಿಸಿ ವಿದ್ಯಾರ್ಥಿ ಶಿಕ್ಷಕರಿಗೆ ಭವಿಷ್ಯದಲ್ಲಿ ಗುರಿ ಸಾಧನೆಗೆ ಪ್ರೇರಣೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶ್ರೀಮತಿ ಧನಲಕ್ಷಿö್ಮÃ ಜೀವನದಲ್ಲಿ ನಮ್ಮಾಸೆಯ ಗುರಿಯನ್ನು ಸೇರಬೇಕಾದರೆ ಕಠಿಣ ಶ್ರಮ, ಸ್ಪಷ್ಟತೆ, ಟೀಕೆ-ಟಿಪ್ಪಣಿಗಳಿಗೆ ಎದೆಗುಂದದೆ ತಾಳ್ಮೆಯಿಂದ ಸಾಗುವ ಮನವಿರಬೇಕು. ಇದು ಪ್ರತಿಯೊಬ್ಬರ ಆಶಯವಾಗಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಾಗರ್ ಸ್ವಾಗತಿಸಿದರು, ಐಶ್ವರ್ಯಲಕ್ಷಿö್ಮÃ ಅತಿಥಿಗಳನ್ನು ಪರಿಚಯಿಸಿದರು, ಗೌತಮ್ ಧನ್ಯವಾದವನ್ನಿತ್ತರು, ಲತಾಶ್ರೀ ನಿರೂಪಿಸಿದರು, ಪ್ರೇಮಾ ಅತಿಥಿಗಳಿಗೆ ಪುಷ್ಪ ನೀಡಿ ಗೌರವಿಸಿದರು.

ಸಂಗೀತವೂ ಸೇರಿದಂತೆ ಯಾವುದೇ ಪ್ರದರ್ಶನ ಕಲೆಗಳ ರಸಾಸ್ವಾದನೆಯಲ್ಲಿ ಭಾವನಾತ್ಮಕ

“ಸಂಗೀತವೂ ಸೇರಿದಂತೆ ಯಾವುದೇ ಪ್ರದರ್ಶನ ಕಲೆಗಳ ರಸಾಸ್ವಾದನೆಯಲ್ಲಿ ಭಾವನಾತ್ಮಕ ಹಾಗೂ ಬೌದ್ಧಿಕ ಎಂದು ಎರಡು ಬಗೆ.ಕಲೆಗಳ ವ್ಯಾಕರಣ ತಿಳಿಯದೆ ರಸಾಸ್ವಾದನೆ ಸಹಜವಾಗಿ ಹೃದಯಪೂರ್ವಕವಾಗಿ ನಡೆದರೆ  ಅದು ಭಾವನಾತ್ಮಕ;ಬೌದ್ಧಿಕ ರಸಗ್ರಹಣವು ಭಾವನೆಗಳ ಜತೆಗೆ ಕಲೆಯ ಸೌಂದರ್ಯಕ್ಕೆ ಕಾರಣವಾಗುವ ಅಂಶಗಳನ್ನು ಗ್ರಹಿಸುವ ಮಾರ್ಗವಾಗಿದೆ.ಇದು ‘ ಸಂಸ್ಕಾರಭರಿತ’ ಸಹೃದಯನ ಉದಯಕ್ಕೆ ಮತ್ತು  ಎಚ್ಚರದ ರಸಪ್ರಶಂಸೆಗೆ ಕಾರಣವಾಗುತ್ತದೆ.” ಎಂದು  ಕಲಾವಿದೆ ಹಾಗೂ ಮಣಿಪಾಲ ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಸಂಶೋಧನ ವಿದ್ಯಾರ್ಥಿ ಕುಮಾರಿ ಶ್ರಾವ್ಯಾ ಬಾಸ್ರಿ ಈ ಚೆಗೆ ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ಏರ್ಪಡಿಸಲಾದ ಸಂಗೀತ ರಸಗ್ರಹಣ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಈ ಮಾತುಗಳನ್ನು ಆಡಿದರು.ನಮ್ಮ ನಡುವಿನ,ನಮ್ಮೊಳಗಿನ ಸಂಗೀತದಲ್ಲಿ ಶ್ರುತಿ,ಲಯ,ರಾಗ,ತಾಳ,ಭಾವ ಇತ್ಯಾದಿಗಳ ಸಜೀವ ಸಂಬಂಧವನ್ನು ಶ್ರಾವ್ಯ ಬಾಸ್ರಿ  ಪ್ರಾತ್ಯಕ್ಷಿಕವಾಗಿ  ಮಾಡಿ ತೋರಿಸಿದರಲ್ಲದೆ ವಿವಿಧ ಬಗೆಯ ಗೀತೆಗಳನ್ನು ವಿದ್ಯಾರ್ಥಿ ಶಿಕ್ಷಕರಿಂದ  ಹಾಡಿಸಿದರು. ಪ್ರಶ್ನೆಗಳಿಗೆ ಸಮರ್ಥ ಉತ್ತರ ನೀಡಿದರು. ಡಾ ಮಹಾಬಲೇಶ್ವರ ರಾವ್ ಸ್ವಾಗತ ಕೋರಿ ಶ್ರಾವ್ಯಾ ಅವರನ್ನು ಪರಿಚಯಿಸಿದರೆ ಕು.ನಿರುತಾ ಭಟ್ ಸ್ಮರಣಿಕೆ ನೀಡಿದರು.ಕು .ಭವ್ಯ ಕಿಣಿ ಧನ್ಯವಾದ ಸಮರ್ಪಣೆ ಮಾಡಿದರು.